Wednesday, 29 July 2015

ಕರ್ತರಿ ಪ್ರಯೋಗ

ಕರ್ತರಿ ಪ್ರಯೋಗ
ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ .”

ಉದಾ : ಕರ್ತೃಪದ ಕರ್ಮಪದ ಕ್ರಿಯಾಪದ
ರಾಮನು ರಾವಣನನ್ನು ಕೊಂದನು

ಈ ಉದಾ ಯಲ್ಲಿ ” ಕೊಂದನು ” ಎಂಬ ಕ್ರಿಯಾಪದವು ” ರಾಮನು” ಎಂಬ ಕರ್ತೃ ಪದವನ್ನು ಅನುಸರಿಸಿದೆ. ಕರ್ತರಿ ಪ್ರಯೋಗವು ಯಾವಾಗಲೂ ಆದಿಯಲ್ಲಿ ಕರ್ತೃ ಪದವನ್ನು ಮಧ್ಯದಲ್ಲಿ ಕರ್ಮಪದವನ್ನು ಅಂತ್ಯದಲ್ಲಿ ಕ್ರಿಯಾಪದವನ್ನು ಒಳಗೊಂದಿರುತ್ತದೆ.

ಕರ್ತೃ ಪದವು ಪ್ರಧಮವಿಭಕ್ತಿಯಿಂದ ಕೂಡದ್ದು.ಕರ್ಮ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿರುತ್ತದೆ.ಕ್ರಿಯಾ ಪದವು ಕ್ರಿಯೆಯನ್ನು ಸೂಚಿಸುತ್ತದೆ.

ಉದಾ : 
1. ರಾಮನು ರಾವಣನನ್ನು ಕೊಂದನು
2. ನಾನು ಕವಿತೆಯನ್ನು ಬರೆಯುತ್ತೇನೆ.
3. ಸೀತೆಯು ಹಣ್ಣನ್ನು ತಿಂದಳು
4. ಮಳೆಯು ಇಳೆಯನ್ನು ತಣಿಸಿತು.
5. ರಾಮನು ಸೇತುವೆಯನ್ನು ಕಟ್ಟಿದನು.
6. ಭೀಮನು ಬಕಾಸುರನನ್ನು ಕೊಂದನು.
7. ಅಣ್ಣನು ನನ್ನನ್ನು ಕೊಂದನು .
8. ಮಕ್ಕಳು ಪುಸ್ತಕವನ್ನು ಓದಿದರು .
9. ಜನರು ಜಾತ್ರೆಯನ್ನು ಕಂಡರು .

ಡಾ.ಎಂ.ಕೆ.ಮಂಜುನಾಥ ಬರವಣಿಗೆಗಳು

  ಮಾ ಕೃ ಮಂಜು ಅರ್ಥಾತ್ ಡಾ.ಎಂ.ಕೆ.ಮಂಜುನಾಥ ಆದ ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದವನು. ತಂದೆ ದೊಡ್ಡಿನಿಂಗೇಗೌಡರ ಮಗ ಕೃಷ್ಣೇಗೌಡ, ತಾಯಿ ಶ...