Wednesday, 29 July 2015

ದ್ವಿರುಕ್ತಿ, ಜೋಡುನುಡಿ, ನುಡಿಗಟ್ಟುಗಳು/ ಪಡೆನುಡಿ

ದ್ವಿರುಕ್ತಿ :
ಒಂದು ವಿಶೇಷ ಅರ್ಥವನ್ನು ಅಭಿವ್ಯಕ್ತಿಸುವುದಕ್ಕಾಗಿ ಒಂದು ಪದ ಅಥವ
ಒಂದು ವಾಕ್ಯವನ್ನು ಎರಡೆರಡೂ ಬಾರಿ
ಬಳಸುವುದನ್ನು ದ್ವಿರುಕ್ತಿ ಎನ್ನುತ್ತೇವೆ.
ಉದಾ: ಹೌದು ಹೌದು, ನಿಲ್ಲುನಿಲ್ಲು ಎಲೇ ಎಲೇ, ಕಳ್ಳ ಕಳ್ಳ, ಅಗೋ ಅಗೋ,
ಬನ್ನಿ ಬನ್ನಿ, ಹತ್ತಿರ ಹತ್ತಿರ, ಅಬ್ಬಬ್ಬಾ ಬೇಡ ಬೇಡ, ಇತ್ಯಾದಿ

ಜೋಡಿ ನುಡು (ಜೋಡು ನುಡಿ)

ಕನ್ನಡದಲ್ಲಿ ದ್ವಿರುಕ್ತಿಗಳಂತೆ ಕಾಣುವ ಎಷ್ಟೋ ಪದಗಳಿವೆ ಆದರೆ ಅವುಗಳು
ದ್ವಿರುಕ್ತಿಗಳಲ್ಲ ಏಕೆಂದರೆ ಪೂರ್ವ ಪದಕ್ಕೆ ಅರ್ಥವಿದ್ದು
ಉತ್ತರ ಪದಕ್ಕೆ ಅರ್ಥವಿದುವುದಿಲ್ಲ ಆದರೂ ಜೊತೆ ಜೊತೆಯಾಗಿ ಉಚ್ಛರಿಸಲ್ಪಡುತ್ತವೆ
ಉದಾ: ದೇವರು ದಿಂಡಿರು,
ಕೂಲಿನಾಲಿ
ಬಟ್ಟೆ ಬರೆ
ಸಂಧಿ ಗೊಂಧಿ
ಒಂದೇ ಅರ್ಥ ಕೊಡುವ ಎರದು ಬಿನ್ನ ಭಾಷಾ ಪದಗಳು ಜೊತೆ ಜೊತೆಯಾಗಿ
ಬಳಕೆಗೊಂಡರೆ ಅದನ್ನೂ ಜೋಡು ನುಡಿ ಎನ್ನುತ್ತಾರೆ
ಉದಾ: ಕಡೆ ಲಾಸ್ಟ್
ಕ್ಯಾಚ್ ಇಡಿ
ಸಂತೆಬಜಾರ್
ಗೇಟ್ಬಾಗಿಲು
ಕಾಂಪೌಂಡ್ ಗೋಡೆ
ದ್ವಾರಬಾಗಿಲು
ಆಕಳಗೋಮೂತ್ರ
ಹಣ್ಣು ಹಂಪಲು
ಹಳದಿಪೀತಾಂಬರ
ಸಂಪೂರ್ಣ ವಿರುದ್ಧಾರ್ಥ ಕೊಡುವ ಪದಗಳು
ಉದಾ: ಪಶುಪಕ್ಷಿ
ಮನೆ ಮಠ
ತಂದೆ ತಾಯಿ
ಹಗಲು ರಾತ್ರಿ
ಆಟಪಾಠ ಇತ್ಯಾದಿ
ಪ್ರತಿ ಎರಡನೇ ಅಕ್ಷರ "ಗೀ" ಪದದಿಂದ ರೂಪುಗೊಳ್ಳುವುದು
ಉದಾ: ನಗು ಗಿಗು
ಬುದ್ದಿ ಗಿದ್ದಿ
ರೊಕ್ಕಗಿಕ್ಕ
ನೋವು ಗೀವು
ಶಾಲೆಗೀಲೆ
ಮಾತುಗೀತು

ನುಡಿಗಟ್ಟುಗಳು/ ಪಡೆನುಡಿ

ಅಡ್ದಹಾದಿ ಇಡಿ - ರೀತಿಬಿಟ್ಟು ನಡೆ
ಅಡ್ದಗಾಲು ಹಾಕಿ - ಅಡೆತಡೆ ಮಾಡು
ಅಕಾಶ ಕಳಕೊಂಡೂ ಬೀಳು - ಏನು ತಿಳಿಯಾದಂತಾಗು
ಉಂಡ ಮನೆಗಳ ಎಣಿಸು - ಉಪಕಾರ ಮಾಡಿದವನಿಗೆ ಅಪಕಾರ ಮಾಡು
ಕಣ್ಣಿಡು - ಮನಸ್ಸು ಮಾಡು
ಕಾಲು ಕೆದರು - ಜಗಳ ತೆಗೆ
ಕಾಲಮೇಲೆ ನಿಲ್ಲು - ಸ್ವಾವಲಂಬಿಯಾಗು
ಕಾಲು ಇಡಿ - ಶರಣಾಗು
ಕಿವಿ ಕಚ್ಚು - ಚಾಡಿಹೇಳು
ಕೈ ಕೊಡು - ಮೋಸಮಾಡು/ನೆರವಾಗಿ/ಸಹಾಯಮಾಡು
ಕೆಂಡಕಾರು - ದ್ವೇಷ್ಮ ಮಾಡು/ಸಿಟ್ಟಾಗು
ಕೈಯಲ್ಲಿ ಕಡ್ಡಿ ಕೊಟ್ಟು ಹೇಳು - ಪರಿ ಪರಿಯಿಂದ ಹೇಳು
ಕೈ ನೋಡು - ಬಲ ಪರೀಕ್ಷಿಸು
ಕೈ ಮೇಲೆ ಕೈ ಹಾಕು - ವಚನಕೊಡು
ಕೈ ತೊಳಕೊಂಡು ಬೆನ್ನು ಹತ್ತು - ಗಂಟು ಬೀಳು
ಕೈ ಗೂ ಬಾಯಿಗೂ ಜಗಳ ಹಚ್ಚು - ಊಟ ಮಾಡು
ಕೈ ಚಾಚು - ಬೇಡು
ಕೈಯಾಸೆ ಮಾಡು - ಲಂಚ ನೀಡು
ಗಾಳಿಗೆ ತೂರು - ತಿರಸ್ಕರಿಸು
ಗಿಳಿಓದು - ಅರ್ಥ ತಿಳಿಯದೆ ಓದು
ಗುಟ್ಟು ರಟ್ಟು ಮಾಡು - ಗುಪ್ತ ಸಂಗತಿ ಬಯಲು ಮಾಡು
ಗುಡ್ಡಕ್ಕೆ ಕಲ್ಲು ಹೊರು - ವ್ಯರ್ಥ ಪ್ರಯತ್ನ ಮಾಡು
ಟೊಪ್ಪಿ ಹಾಕು - ಮೋಸ ಮಾಡು
ಟೊಂಕ ಕಟ್ಟು - ಸಿದ್ಧವಾಗು
ತಲೆದೂಗು - ಒಪ್ಪಿಗೆ ಕೊಡು/ಮೆಚ್ಚಿಗೆ ಕೊಡು
ಹೊಟ್ಟೆಯಲ್ಲಿ ಹಾಕಿಕೋ - ಕ್ಷಮಿಸು
ತಲೆ ಜಾಡಿಸು - ಕ್ಷಮಿಸು
ಬೆನ್ನು ತಟ್ಟು - ಹುರುಪು ಕೊಡು
ಮೂಲೆ ಗುಂಪಾಗು - ಕೆಲಸಕ್ಕೆ ಬಾರದಂತೆ
ಶಿಸ್ತಿನ ಸಿಪಾಯಿ - ದಕ್ಷ/ಸಮರ್ಥ
ಬೆತ್ತದ ರುಚಿ ನೋಡು - ಶಿಕ್ಷಿಸು
ಗಂಟಲು ಬಿಗಿ - ಅತೀವ ದುಃಖ
ಮೂಗಿಗೆ ತುಪ್ಪ ಹಚ್ಚು - ಆಸೆ ತೋರಿಸು
ಮುಖದ ನೀರಿಳಿಸು - ಅವಮಾನಗೊಳಿಸು
ಹಣ್ಣಾಗು - ಅನುಭವಿಯಾಗು
ನೆಗೆದು ಬೀಳು - ಸಾಯುವುದು
ಕೈ ಕಚ್ಚು - ನಷ್ಟವಾಗು
ಕಟ್ಟಿಟ್ಟ ಬುತ್ತಿ - ಅನುಭವಿಸಲೇ ಬೇಕಾದ್ದು
ಹಿತ್ತಾಳೆ ಕಿವಿ - ಚಾಡಿಮಾತು ಕೇಳುವವ
ಅಳಿಲು ಸೇವೆ - ನಿಷ್ಟೆ ತುಂಬಿದ ಅಲ್ಪ ಸೇವೆ
ಅತ್ತಿದ ಕೈ - ಪ್ರವೀಣ
ಎರಡು ಬಗೆ - ದ್ರೋಹ ಚಿಂತನೆ
ಕಂಬಿ ಕೀಳು - ಓಡಿಹೋಗು
ಗಾಳ ಹಾಕು - ಪ್ರಲೋಭನೆ ಒಡ್ಡು
ಕೈ ಸುಡು - ನಷ್ಟವಾಗು
ತಿರುಕನ ಕನಸು - ನನಸಾಗದ ಇಚ್ಛೆ

ಡಾ.ಎಂ.ಕೆ.ಮಂಜುನಾಥ ಬರವಣಿಗೆಗಳು

  ಮಾ ಕೃ ಮಂಜು ಅರ್ಥಾತ್ ಡಾ.ಎಂ.ಕೆ.ಮಂಜುನಾಥ ಆದ ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದವನು. ತಂದೆ ದೊಡ್ಡಿನಿಂಗೇಗೌಡರ ಮಗ ಕೃಷ್ಣೇಗೌಡ, ತಾಯಿ ಶ...